
ಮಾನ್ವಿ ಏ.6: ಮಾನ್ವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇಮಕವಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ . ಬುಧವಾರ ಕಸಾಪ ಅಧ್ಯಕ್ಷ ರವಿಕುಮಾರ್ ಪಾಟೀಲ್ ವಕೀಲರು ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇಮಕ ಮಾಡಿದ ನೂತನ ಪದಾಧಿಕಾರಿಗಳ ಪಟ್ಟಿಯ ವಿವರ ನೀಡಿದರು . ಬಸವರಾಜ ಜಂಗಮರಹಳ್ಳಿ ಮತ್ತು ಬಿಷ್ಟಪ್ಪ ಅಬ್ಬಿಗೇರಿ ( ಗೌರವ ಕಾರ್ಯದರ್ಶಿಗಳು ) , ಮನ್ಸಾಲಿ ಯಂಕಯ್ಯಶೆಟ್ಟಿ ( ಗೌರವ ಕೋಶಾಧ್ಯಕ್ಷ ) , ಗೋಪಾಲ್ ನಾಯಕ ಜೂಕೂರು ( ಪರಿಶಿಷ್ಟ ಪಂಗಡ ಪ್ರತಿನಿಧಿ ) , ಟಿ.ಕೇಮ್ಯಾ ನಾಯ್ಕ ಮತ್ತು ಲಕ್ಷ್ಮಣರಾಮ್ ಕಪಗಲ್ ( ಪರಿಶಿಷ್ಟ ಜಾತಿ ಪ್ರತಿನಿಧಿ ) , ಕೆ.ಎನ್.ವಿಜಯಲಕ್ಷ್ಮಿ ಮತ್ತು ಪಿ.ಉಷಾ ಜ್ಯೋತಿ ( ಮಹಿಳಾ ಪ್ರತಿನಿಧಿಗಳು ) , ಮನೋಜ್ ಕುಮಾರ್ ಮಿಶ್ರಾ ( ಸಂಘಸಂಸ್ಥೆ ಪ್ರತಿನಿಧಿ ) , ವೆಂಕಟೇಶ ಗುಡ್ಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ( ಪದನಿಮಿತ್ಯ ಸದಸ್ಯರು ) , ಮಹ್ಮದ್ ಮುಜೀಬ್ ( ನಿಕಟಪೂರ್ವ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲ್ಲಾವುದ್ದೀನ್ , ಶರಣಯ್ಯಸ್ವಾಮಿ , ಬಸವರಾಜ ಕನ್ನಾರಿ , ಹರ್ಷವರ್ಧನ , ಸುರೇಶ ಕುಮಾರ್ , ಮಲ್ಲಿಕಾರ್ಜುನ ಹಾಗೂ ಸಹಾಯಕ ಕಾರ್ಯದರ್ಶಿಗಳನ್ನಾಗಿ ಹೆಚ್.ಟಿ.ಪ್ರಕಾಶಬಾಬು ಮತ್ತು ಚಂದ್ರಶೇಖರ ಮದ್ಲಾಪುರ , ಹಿರೇಕೊಟ್ಟೆಕಲ್ ಹೋಬಳಿಯ ಕಸಾಪ ಅಧ್ಯಕ್ಷರನ್ನಾಗಿ ವಿರುಪಾಕ್ಷಿಗೌಡ ಪೋತ್ನಾಳ್ ಇವರನ್ನು ನೇಮಕ ಮಾಡಲಾಗಿದೆ ಎಂದು ರವಿಕುಮಾರ್ ಪಾಟೀಲ್ ತಿಳಿಸಿದರು . ಅದೇರೀತಿ ವಿಶೇಷ ಆಹ್ವಾನಿತರನ್ನಾಗಿ ಕೆ.ಬಸವಂತಪ್ಪ , ಆರ್.ವಿ.ಹಿರೇಮಠ , ರಾಜಾ ಮಹೇಂದ್ರ ನಾಯಕ , ಎ.ಬಾಲಸ್ವಾಮಿ ಕೊಡ್ಲಿ , ಚಂದ್ರಶೇಖರ ಸುವರ್ಣಗಿರಿಮಠ , ಶರಣೇಗೌಡ ಯರದೊಡ್ಡಿ ಮಲ್ಲಮಗೌಡ ನಕ್ಕುಂದಿ , ಜ್ಯೋತಿರ್ಲಿಂಗನಗೌಡ ತಡಕಲ್ , ಮನೋಹರ ವಿಶ್ವಕರ್ಮ , ಅಯ್ಯಪ್ಪನಾಯಕ ಮಲ್ಲದಗುಡ್ಡ , ಸೈಯದ್ ತನ್ನೀರುಲ್ ಹಸನ್ , ಎಸ್.ಹೆಚ್.ವಾಜಿದ್ಖಾದ್ರಿ , ಯಂಕಣ್ಣಯಾದವ್ , ಹೆಚ್.ಶರ್ಫುದ್ದೀನ್ ಪೋತ್ನಾಳ್ , ಶಾಂತಮೂರ್ತಿಸ್ವಾಮಿ , ಮರಿಶಾಂತಯ್ಯಸ್ವಾಮಿ , ಸೈಯದ್ ತಾಜುದ್ದೀನ್ , ಶರಣಬಸವ ನೀರಮಾನ್ವಿ , ಹನುಮಂತಪ್ಪ ಕೊಟ್ಟೆಕಲ್ , ಪಿ.ಚನ್ನಬಸವ ಬಾಗಲವಾಡ , ಯಲ್ಲಪ್ಪ ನಿಲೋಗಲ್ , ಕೃಪಾ ಸಾಗರ್ ಪಾಟೀಲ್ , ಮೌಲಾನಾಚಾಂದ್ , ಕೃಷ್ಣಮೂರ್ತಿ ಗುಡಿ , ತಿಪ್ಪಣ್ಣ ಹೊಸಮನಿ , ರವಿಶರ್ಮ , ಆರ್.ಕೆ.ಈರಣ್ಣ , ಅಮರೇಶ ಚಿಂಚಲ್ , ಮಂಜುನಾಥ ಕಮತರ್ , ಚನ್ನಬಸವ ಹಿರೇಮಠ ,ಅರುಣ್ ಚಂದ್ರಾ , ರಾಜಾ ವಿಜಯಕುಮಾರನಾಯಕ , ಹನುಮಂತ ನಂದಿಹಾಳ , ರಾಮು ಹೊಳೆಯಪ್ಪನವರ್ , ಎಸ್.ಎಸ್.ಪಾಟೀಲ್ , ಕೃಷ್ಣ ಮಾಸ್ಟರ್ , ಪಿ.ರವಿಕುಮಾರ , ಚಂದ್ರಶೇಖರ ಬಾಗೋಡಿ , ಜಿ.ಎಸ್.ಬಾಲಾಜಿಸಿಂಗ್ , ಲಕ್ಷ್ಮಣ ಜಾನೇಕಲ್ , ಶಿವಕುಮಾರ ಜಗ್ಗಿ , ನಾಗೇಶಯ್ಯಸ್ವಾಮಿ ನಾಗೋಲಿ , ವಿರುಪಣ್ಣ ಪಾಟೀಲ್ , ಕುಮಾರಸ್ವಾಮಿ ಮೇದಾ , ಮಹೆಬೂಬ್ ಹರವಿ , ಶರಣಬಸವ ಮದ್ಲಾಪುರ , ಸಂತೋಷ ಹೂಗಾರ , ಶಂಕ್ರಪ್ಪ ಅಂಗಡಿ ನಕ್ಕುಂದಿ , ಶಂಕ್ರಯ್ಯಸ್ವಾಮಿ ಹಿರೇಮಠ , ಕೆ.ಶರಣಬಸವ ಹರವಿ , ಮಹಿಳಾ ವಿಶೇಷ ಆಹ್ವಾನಿತರಾಗಿ ಮಹಮೂದಾಬೇಗಂ , ಡಾ.ರೋಹಿಣಿ ಮಾನ್ವಿಕರ್ , ಸರೋಜಾ ಗುಮ್ಮಾ ಬಸವರಾಜ , ಲಕ್ಷ್ಮೀದೇವಿನಾಯಕ ಡಾ.ಚನ್ನಬಸವನಾಯಕ , ಡಾ.ಪ್ರಜ್ಞಾಹರಿಪ್ರಸಾದ , ಶಶಿಕಲಾ ಪಾಟೀಲ್ , ಅನುರಾಧ ಸೂಗಪ್ಪಗೌಡ , ಡಾ.ಅಂಬಿಕಾ ಮಧುಸೂದನ್ , ಅಂಬಮ್ಮ ಪ್ರತಾಪಸಿಂಗ್ , ಚಿನ್ನಮ್ಮ ಮುದ್ದಂಗುಡ್ಡಿ , ಲಕ್ಷ್ಮೀದೇವಿ ಜಿ.ಸೋಮಶೇಖರ , ಅಶ್ವಿನಿ ಸಂಗಮೇಶ ಮುಧೋಳ್ , ನಿಹಾರಿಕಾ ನಾಯಕ , ಶ್ರೀದೇವಿ ಬಳಿಗಾರ ಎಸ್.ಪಾಟೀಲ್ , ಗೌರವ ವಿಶೇಷ ಆಹ್ವಾನಿತರಾಗಿ ಎ.ಬಿ. ಉಪ್ಪಳಮಠ , ಅನಿಲ್ ಕುಮಾರ , ಕೆ.ಈ.ನರಸಿಂಹ , ಮೂಕಪ್ಪ ಕಟ್ಟಿಮನಿ ಇವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ರವಿಕುಮಾರ್ ಪಾಟೀಲ್ ತಿಳಿಸಿದರು .