ಶುಭವ ತಂದೀತು ಶುಭಕೃತ್.ಮೋಡಗಳು ಕರೆದಾವು,ನದಿಗಳು ತುಂಬಿ ಹರಿದಾವು,ಕಾಡೀತು ಅತಿವೃಷ್ಟಿ.ಗುಡುಗೀತು ನಭ,ನಡುಗೀತು ನೆಲ. ಪಶುಪತಿಯು ಪೊರೆದಾನು ದನಕರುಗಳಾದಿ ಪಶುಸಂಕುಲವ .ಒಕ್ಕಲು ಮಕ್ಕಳ ಮುಖದಲ್ಲಿ ಮೂಡೀತು ನಗೆ.ದುಡಿವವರಿಗೆ ಬೆಲೆ,ದುಡಿಯದವರಿಗೆ ಇಲ್ಲ ನೆಲೆ.ಶಿಷ್ಟರಿಗೆ ಒಳಿತಾಗುವ ದುಷ್ಟರಿಗೆ ಕೇಡಾಗುವ ಕಾಲ.
ತಂಟೆ ತಕರಾರುಗಳುಂಟು ರಾಜಕಾರಣದಿ. ಹಾವು ಮುಂಗುಸಿಗಳಂತೆ ಹಗೆಸಾಧಿಸುವರು,ವಿಪ್ಲವಗಳೇಳುವವು.ಯುದ್ಧದ ಫಲ ಕಾಡೀತು.ದುರ್ಜನರ ಕಾಟ ಹೆಚ್ಚೀತು.ತಲೆಯಾಳುಗಳುದುರುವವು.ಅಕಾಲಫಲ ತಿನ್ನಲಾಗದು.ಒಳಿತು ಹೆಚ್ಚಿ ಕೆಡುಕುಕಡಿಮೆಯಾದೀತು ಶುಭಕೃತ್ ಸಂವತ್ಸರದಿ.
