ಮಾನ್ವಿ: ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ಅಧ್ಯಕ್ಷರಾಗಿ ಆರ್. ಮುತ್ತುರಾಜ ಶೆಟ್ಟಿ , ಕಾರ್ಯದರ್ಶಿಯಾಗಿ ಬಿ.ರಾಘವೇಂದ್ರ ಶೆಟ್ಟಿ ಪುನರಾಯ್ಕೆ

ಮಾನ್ವಿ ಜ.30 : ಇಂದು ಮಾನ್ವಿ ಪಟ್ಟಣದಲ್ಲಿ ನಡೆದ  ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ  ಸಂಘದ ಅಧ್ಯಕ್ಷರಾಗಿ ಆರ್.ಮುತ್ತುರಾಜ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಬಿ.ರಾಘವೇಂದ್ರ ಶೆಟ್ಟಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.  ಮುಂದಿನ 3 ವರ್ಷಗಳ ಅವಧಿಗೆ ಇವರು ಅಧಿಕಾರ ಹೊಂದಿರುತ್ತಾರೆ. ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.